Shri Hanuman Chalisa Lyrics in Kannada
ಹನುಮಾನ್ ಚಾಲಿಸಾ
"ಚಾಲಿಸಾ" ಎನ್ನುವ ಪದವು "ಚಾಲಿಸ್" ಎನ್ನುವ ಪದದಿಂದ ಬಂದಿದೆ, ಇದರರ್ಥ ನಲವತ್ತು. ಚಾಲೀಸಾವು 40 ಸಾಲುಗಳ
ಸ್ತುತಿ ಮತ್ತು ದೇವರ ಮೇಲಿನ ಭಕ್ತಿಯನ್ನು ಪ್ರಸ್ತುತ ಪಡಿಸುವುದಾಗಿದ್ದು, ಇದು ಅವರು ಹೇಗೆ ಶ್ರೇಷ್ಠರಾದರು
ಎನ್ನುವುದನ್ನು ಅವರು ಕೈಗೊಂಡ ಕೃತಿಗಳು ಮತ್ತು ಕಾರ್ಯಗಳನ್ನು ಸ್ತುತಿಸುವುದರ ಮೂಲಕ ನೆನಪಿಸುತ್ತದೆ
ತುಳಸಿದಾಸರು ಹನುಮಾನ್ ಚಾಲೀಸವನ್ನು ಬಹಳ ಸುಂದರವಾಗಿ ಬರೆದಿದ್ದಾರೆ.
ಹನುಮಾನ್ ಚಾಲೀಸಾ ಆರತಿ
ಹನುಮಾನ್ ಎನ್ನುವುದು ಶಕ್ತಿ, ಅತ್ಯಂತ ಭಕ್ತಿ ಮತ್ತು ಸಂರಕ್ಷಣೆಯ ಸಂಕೇತವಾಗಿದೆ. ಅವರನ್ನು ವಿಶೇಷವಾಗಿ
ಮಂಗಳವಾರ ಮತ್ತು ಶನಿವಾರದಂದು ಪೂಜಿಸಲಾಗುತ್ತದೆ ಹಾಗೂ ಸಾಮಾನ್ಯವಾಗಿ ದುಷ್ಟರಿಂದ ರಅಕ್ಷಣೆ ನೀಡುವವರು
ಎಂದು ಪರಿಗಣಿಸಲಾಗುತ್ತದೆ. ಹನುಮಾನ್ ಚಾಲೀಸಾವು ಭಗವಾನ್ ಹನುಮಂತನನ್ನು ಸ್ತುತಿಸುವ ಒಂದು ಸ್ತುತಿ
ಆಗಿದ್ದು ಹಾಗೂ ನಾವು ಆತನಲ್ಲಿ ಹೇಗೆ ಹೆಚ್ಚಿನ ನಂಬಿಕೆಯನ್ನು ಹೊಂದಿರಬೇಕು ಎನ್ನುವುದನ್ನು ತಿಳಿಸುತ್ತದೆ.
ಇತರರಿಗಾಗಿ ಬದುಕಲು ಹಾಗೂ ಜಗತ್ತಿನಲ್ಲಿ ಒಳ್ಳೆಯದನ್ನು ರಕ್ಷಿಸಬೇಕು ಎನ್ನುವುದನ್ನು ಆತನು ನಮಗೆ ತಿಳಿಸುತ್ತಾನೆ
ಹಾಗೂ ಜ್ಞಾಪಿಸುತ್ತಾನೆ .
ರಾಮಾಯಣದಲ್ಲಿ ಹನುಮಂತ
ರಾಮಾಯಣದಲ್ಲಿ ನಾವು ಕಾಣುವ ಅತ್ಯಂತ ವಿನಮ್ರ ಮತ್ತು ಶಕ್ತಿಯುತ ಪಾತ್ರವಾಗಿರುವುದರಿಂದ, ಸ್ವಲ್ಪ
ಸಮಯದವರೆಗೆ ಆತನು ತನ್ನ ಸಾಮರ್ಥ್ಯವನ್ನು ಮರೆತುಬಿಡುತ್ತಾನೆ. ಅಂತಹ ಪಾತ್ರವನ್ನು ನೆನಪಿಸುವ ಮೂಲಕ ನಾವು
ಮನುಷ್ಯರಾಗಿದ್ದು ಎಷ್ಟು ಬಾರಿ ನಮ್ಮ ಸಾಮರ್ಥ್ಯಗಳ ಬಗ್ಗೆ ಅರಿವಿರುವುದಿಲ್ಲ ಎನ್ನುವುದನ್ನು ಹಿಂದೂ ಪುರಾಣಗಳು
ಪ್ರತಿಬಿಂಬಿಸುತ್ತವೆ. ನಾವು ನಮ್ಮೊಳಗೇ ನೋಡಿಕೊಳ್ಳಬೇಕು ಹಾಗೂ ಜೀವನವನ್ನು ನಡೆಸುವಾಗ ಮಾಡಬೇಕಾದ ಅನೇಕ
ಪ್ರಯೋಗಗಳ ಮೂಲಕ ನಮ್ಮ ಶಕ್ತಿಯನ್ನು ನಾವೇ ಕಂಡುಹಿಡಿದುಕೊಳ್ಳಬೇಕು.
ಹನುಮಾನ್ ಚಾಲೀಸಾ ಸಾಹಿತ್ಯ
ಹನುಮಾನ್ ಚಾಲೀಸಾದ ಸಾಹಿತ್ಯವು ಅಂತರ್ಜಾಲದಲ್ಲಿ ಮತ್ತು ಪವಿತ್ರ ಗ್ರಂಥಗಳ ರೂಪದಲ್ಲಿ ಸುಲಭವಾಗಿ ಲಭ್ಯವಿದೆ.
ಹನುಮಾನ್ ಚಾಲೀಸಾವನ್ನು ಸಮರ್ಪಣೆಯ ಭಾವದಿಂದ, ಲೌಕಿಕ ಪ್ರೀತಿಯಿಂದ ಹಾಗೂ ಹೃದಯದಲ್ಲಿ
ಸಾಮರಸ್ಯವನ್ನು ಹೊಂದಿ ಓದಬೇಕು. ನೀವು ಬೆಳಿಗ್ಗೆ ಸ್ನಾನ ಮಾಡುವ ಮೂಲಕ ಮತ್ತು ದೇವಸ್ಥಾನವನ್ನು (ಅಥವಾ
ನೀವು ಪೂಜಿಸುವ ಯಾವುದೇ ಸ್ಥಳ) ಸ್ವಚ್ಛಗೊಳಿಸುವ ಮೂಲಕ ನಿಮ್ಮ ಗೌರವವನ್ನು ತೋರಿಸಲು
ಪ್ರಾರಂಭಿಸಬಹುದು. ನಂತರ ನೀವು ಸ್ಪಷ್ಟ ಹಾಗೂ ಸ್ವಚ್ಚ ಮನಸ್ಸಿನಿಂದ ಮತ್ತು ಭಗವಂತನ ಬಗ್ಗೆ ನಿಮ್ಮ ಪ್ರೀತಿ
ಮತ್ತು ಭಕ್ತಿಯನ್ನು ತೋರಿಸುವ ಸಲುವಾಗಿ ಕೈಗಳನ್ನು ಜೋಡಿಸಿ ಕುಳಿತುಕೊಳ್ಳಬೇಕು.
ಹಿಂದೂ ಧರ್ಮವು ಒಂದು ಜೀವನ ವಿಧಾನವಾಗಿದೆ. ನಾವು ದಿನವಿಡೀ ಚೈತನ್ಯವನ್ನು ಸಾಕಾರಗೊಳಿಸುತ್ತೇವೆ ಮತ್ತು
ಇತರರು ನಮ್ಮೊಂದಿಗೆ ತಮ್ಮ ಅತ್ಯುತ್ತಮ ವ್ಯಕ್ತಿತ್ವವನ್ನು ತೋರಿಸಿಕೊಳ್ಳಲು ಸಾಧ್ಯವಾಗದಿದ್ದರೂ ಸಹ ಅವರನ್ನು
ಗೌರವಿಸುವ ಹಾಗೂ ರಕ್ಷಿಸುವ ಭರವಸೆ ನೀಡುತ್ತೇವೆ. ಆದ್ದರಿಂದ ನಮ್ಮ ಪ್ರಾರ್ಥನೆಗಳು ಕೇವಲ ಹನುಮಾನ್
ಚಾಲೀಸಾದೊಂದಿಗೆ ಕೊನೆಗೊಳ್ಳುವುದಿಲ್ಲ. ಅವರು ತಮ್ಮ ಹನುಮಾನ್ ಚಾಲೀಸಾಗಾಗಿ ಹೆಸರುವಾಸಿಯಾಗಿದ್ದಾರೆ.
ಹನುಮಾನ್ ಚಾಲೀಸಾವನ್ನು ಗಾಯನ ರೂಪದಲ್ಲಿ ಪ್ರಸ್ತುತ ಪಡಿಸುವುದಕ್ಕಾಗಿಯೇ ಅವರ ಧ್ವನಿಯು
ಪ್ರತಿರೂಪವಾಗಿದೆ ಅನಿಸುತ್ತದೆ. ನೀವು ಹನುಮಾನ್ ಚಾಲೀಸಾದ ಧ್ವನಿಮುದ್ರಿತ ಆವೃತ್ತಿಯನ್ನು ಕೇಳಲು ಬಯಸಿದಲ್ಲಿ,
ನೀವು ಯಾವಾಗಲೂ ಗುಲ್ಶನ್ ಕುಮಾರ್ ಅವರ ಪರ್ಫಾರ್ಮೆನ್ಸ್ ಅನ್ನು ಕೇಳಬಹುದು. ಹನುಮಾನ್ ಚಾಲೀಸಾವು
ಎಲ್ಲಾ ಭಾರತೀಯ ಭಾಷೆಗಳಲ್ಲಿಯೂ ಲಭ್ಯವಿದೆ. ಏಕೆಂದರೆ ಹಿಂದೂ ಧರ್ಮವು ಒಳಗೊಳ್ಳುವಿಕೆ ಮತ್ತು ಏಕತೆಯನ್ನು
ಹೊಂದಿರುವುದರಿಂದಾಗಿ.
ಮಂಗಳವಾರದಂದು ಹನುಮಾನ್ ಉಪವಾಸ
ಮಂಗಳವಾರಗಳನ್ನು ಭಗವಾನ್ ಹನುಮಂತನಿಗೆ ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ,ಹಾಗೂ ಅನೇಕ ಜನರು
ಆತನ ಬಗ್ಗೆ ತಮಗೆ ಇರುವ ಭಕ್ತಿಯನ್ನು ತೋರಿಸುವ ಹಾಗೂ ತಾವು ಎದುರಿಸುತ್ತಿರುವ ತೊಂದರೆಗಳಿಂದ ಹೊರ ಬರುವ
ಸಲುವಾಗಿ ಆ ದಿನದಂದು ಉಪವಾಸವನ್ನು ಕೈಗೊಳ್ಳುತ್ತಾರೆ..
ಜನರು ಸಾಮಾನ್ಯವಾಗಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸವನ್ನು ಆಚರಿಸುತ್ತಾರೆ. ನೀವು ಬೇಗನೆ
ಎದ್ದು ಸ್ನಾನದ ನಂತರ ಗಣೇಶ ಮತ್ತು ಹನುಮಂತನನ್ನು ಪೂಜಿಸಲು ಪ್ರಾರಂಭಿಸಬೇಕು. ಪ್ರಾರ್ಥನೆಯ ಸಮಯದಲ್ಲಿ
ಕೆಂಪು ಬಣ್ಣವನ್ನು ಧರಿಸಿ ಮತ್ತು ಕೆಂಪು ಹೂವುಗಳನ್ನು ಅರ್ಪಿಸುವ ಮೂಲಕ ದಿನವನ್ನು ಸ್ಮರಣೀಯಗೊಳಿಸಲಾಗುತ್ತದೆ.
ಹನುಮಾನ್ ಚಾಲೀಸಾದಿಂದ ಪಡೆಯಬಹುದಾದ ಪ್ರಯೋಜನಗಳು
ಹನುಮಾನ್ ಚಾಲೀಸಾವು ನಂಬಿಕೆ, ಉತ್ತಮ ಭಕ್ತಿ ಹಾಗೂ ನಮ್ಮಲ್ಲಿಯೇ ನಂಬಿಕೆಯನ್ನು ಇಟ್ಟುಕೊಳ್ಳಬೇಕು
ಎನ್ನುವುದನ್ನು ನಮಗೆ ಕಲಿಸುತ್ತದೆ. ಜೀವನವು ಕಷ್ಟಕರವಾಗಿದ್ದಲ್ಲಿ, ನೀವು ಯಾವಾಗಲೂ ಪರೀಕ್ಷೆಗೆ ಒಳಪಡುತ್ತೀರಿ
ಹಾಗೂ ಉತ್ತಮ ವ್ಯಕ್ತಿಯಾಗಿ ರೂಪಿಸಲ್ಪಡುತ್ತೀರಿ ಹಾಗೂ ತಮ್ಮ ಸಾಮರ್ಥ್ಯದ ಬಗ್ಗೆ ಹೆಚ್ಚು ತಿಳುವಳಿಕೆಯನ್ನು
ಹೊಂದಬಹುದು ಎನ್ನುವುದನ್ನು ನೀವು ಯಾವಾಗಲೂ ನಂಬಬಹುದು. ಭಗವಾನ್ ಹನುಮಂತನು ಇತರರನ್ನು ಅವರ
ರೂಪ, ಲಿಂಗ, ದೇಶ ಅಥವಾ ಇನ್ಯಾವುದನ್ನೂ ಲೆಕ್ಕಿಸದೆ ಗೌರವಿಸುವುದನ್ನು ಕಲಿಸುತ್ತಾನೆ ಮತ್ತು ಎಲ್ಲರ ಒಳಿತಿನಲ್ಲಿ
ನಮ್ಮನ್ನು ಮುಳುಗಿಸಿ ಮತ್ತು ಅದರ ಭಾಗವಾಗುವುದನ್ನು ಕಲಿಸುತ್ತಾನೆ.
ಹನುಮಾನ್ ಚಾಲೀಸಾ ಕನ್ನಡ ಸಾಹಿತ್ಯ ಪಿಡಿಎಫ್ ಡೌನ್ಲೋಡ್
ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ; ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ
ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ; ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ
ಜಯ ಹನುಮಾನ ಜ್ಞಾನ ಗುಣ ಸಾಗರ; ಜಯ ಕಪೀಶ ತಿಹು ಲೋಕ ಉಜಾಗರ
ರಾಮದೂತ ಅತುಲಿತ ಬಲಧಾಮಾ; ಅಂಜನಿ ಪುತ್ರ ಪವನಸುತ ನಾಮಾ
ಮಹಾವೀರ ವಿಕ್ರಮ ಬಜರಂಗೀ; ಕುಮತಿ ನಿವಾರ ಸುಮತಿ ಕೇ ಸಂಗೀ
ಕಂಚನ ವರಣ ವಿರಾಜ ಸುವೇಶಾ; ಕಾನನ ಕುಂಡಲ ಕುಂಚಿತ ಕೇಶಾ
ಹಾಥವಜ್ರ ಔ ಧ್ವಜಾ ವಿರಾಜೈ; ಕಾಂಥೇ ಮೂಂಜ ಜನೇವೂ ಸಾಜೈ
ಶಂಕರ ಸುವನ ಕೇಸರೀ ನಂದನ; ತೇಜ ಪ್ರತಾಪ ಮಹಾಜಗ ವಂದನ
ವಿದ್ಯಾವಾನ ಗುಣೀ ಅತಿ ಚಾತುರ; ರಾಮ ಕಾಜ ಕರಿವೇ ಕೋ ಆತುರ
ಪ್ರಭು ಚರಿತ್ರ ಸುನಿವೇ ಕೋ ರಸಿಯಾ; ರಾಮಲಖನ ಸೀತಾ ಮನ ಬಸಿಯಾ
ಸೂಕ್ಷ್ಮ ರೂಪಧರಿ ಸಿಯಹಿ ದಿಖಾವಾ; ವಿಕಟ ರೂಪಧರಿ ಲಂಕ ಜಲಾವಾ
ಭೀಮ ರೂಪಧರಿ ಅಸುರ ಸಂಹಾರೇ; ರಾಮಚಂದ್ರ ಕೇ ಕಾಜ ಸಂವಾರೇ
ಲಾಯ ಸಂಜೀವನ ಲಖನ ಜಿಯಾಯೇ; ಶ್ರೀ ರಘುವೀರ ಹರಷಿ ಉರಲಾಯೇ
ರಘುಪತಿ ಕೀನ್ಹೀ ಬಹುತ ಬಡಾಯೀ; ತುಮ ಮಮ ಪ್ರಿಯ ಭರತ ಸಮ ಭಾಯೀ
ಸಹಸ್ರ ವದನ ತುಮ್ಹರೋ ಯಶಗಾವೈ; ಅಸ ಕಹಿ ಶ್ರೀಪತಿ ಕಂಠ ಲಗಾವೈ
ಸನಕಾದಿಕ ಬ್ರಹ್ಮಾದಿ ಮುನೀಶಾ; ನಾರದ ಶಾರದ ಸಹಿತ ಅಹೀಶಾ
ಯಮ ಕುಬೇರ ದಿಗಪಾಲ ಜಹಾಂ ತೇ; ಕವಿ ಕೋವಿದ ಕಹಿ ಸಕೇ ಕಹಾಂ ತೇ
ತುಮ ಉಪಕಾರ ಸುಗ್ರೀವಹಿ ಕೀನ್ಹಾ; ರಾಮ ಮಿಲಾಯ ರಾಜಪದ ದೀನ್ಹಾ
ತುಮ್ಹರೋ ಮಂತ್ರ ವಿಭೀಷಣ ಮಾನಾ; ಲಂಕೇಶ್ವರ ಭಯೇ ಸಬ ಜಗ ಜಾನಾ
ಯುಗ ಸಹಸ್ರ ಯೋಜನ ಪರ ಭಾನೂ; ಲೀಲ್ಯೋ ತಾಹಿ ಮಧುರ ಫಲ ಜಾನೂ
ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ; ಜಲಧಿ ಲಾಂಘಿ ಗಯೇ ಅಚರಜ ನಾಹೀ
ದುರ್ಗಮ ಕಾಜ ಜಗತ ಕೇ ಜೇತೇ; ಸುಗಮ ಅನುಗ್ರಹ ತುಮ್ಹರೇ ತೇತೇ
ರಾಮ ದುಆರೇ ತುಮ ರಖವಾರೇ; ಹೋತ ನ ಆಜ್ಞಾ ಬಿನು ಪೈಸಾರೇ
ಸಬ ಸುಖ ಲಹೈ ತುಮ್ಹಾರೀ ಶರಣಾ; ತುಮ ರಕ್ಷಕ ಕಾಹೂ ಕೋ ಡರ ನಾ
ಆಪನ ತೇಜ ಸಮ್ಹಾರೋ ಆಪೈ; ತೀನೋಂ ಲೋಕ ಹಾಂಕ ತೇ ಕಾಂಪೈ
ಭೂತ ಪಿಶಾಚ ನಿಕಟ ನಹಿ ಆವೈ; ಮಹವೀರ ಜಬ ನಾಮ ಸುನಾವೈ
ನಾಸೈ ರೋಗ ಹರೈ ಸಬ ಪೀರಾ; ಜಪತ ನಿರಂತರ ಹನುಮತ ವೀರಾ
ಸಂಕಟ ಸೇ ಹನುಮಾನ ಛುಡಾವೈ; ಮನ ಕ್ರಮ ವಚನ ಧ್ಯಾನ ಜೋ ಲಾವೈ
ಸಬ ಪರ ರಾಮ ತಪಸ್ವೀ ರಾಜಾ; ತಿನಕೇ ಕಾಜ ಸಕಲ ತುಮ ಸಾಜಾ
ಔರ ಮನೋರಧ ಜೋ ಕೋಯಿ ಲಾವೈ; ತಾಸು ಅಮಿತ ಜೀವನ ಫಲ ಪಾವೈ
ಚಾರೋ ಯುಗ ಪ್ರತಾಪ ತುಮ್ಹಾರಾ; ಹೈ ಪ್ರಸಿದ್ಧ ಜಗತ ಉಜಿಯಾರಾ
ಸಾಧು ಸಂತ ಕೇ ತುಮ ರಖವಾರೇ; ಅಸುರ ನಿಕಂದನ ರಾಮ ದುಲಾರೇ
ಅಷ್ಠಸಿದ್ಧಿ ನವ ನಿಧಿ ಕೇ ದಾತಾ; ಅಸ ವರ ದೀನ್ಹ ಜಾನಕೀ ಮಾತಾ
ರಾಮ ರಸಾಯನ ತುಮ್ಹಾರೇ ಪಾಸಾ; ಸದಾ ರಹೋ ರಘುಪತಿ ಕೇ ದಾಸಾ
ತುಮ್ಹರೇ ಭಜನ ರಾಮಕೋ ಪಾವೈ; ಜನ್ಮ ಜನ್ಮ ಕೇ ದುಖ ಬಿಸರಾವೈ
ಅಂತ ಕಾಲ ರಘುಪತಿ ಪುರಜಾಯೀ; ಜಹಾಂ ಜನ್ಮ ಹರಿಭಕ್ತ ಕಹಾಯೀ
ಔರ ದೇವತಾ ಚಿತ್ತ ನ ಧರಯೀ; ಹನುಮತ ಸೇಯಿ ಸರ್ವ ಸುಖ ಕರಯೀ
ಸಂಕಟ ಕ(ಹ)ಟೈ ಮಿಟೈ ಸಬ ಪೀರಾ; ಜೋ ಸುಮಿರೈ ಹನುಮತ ಬಲ ವೀರಾ
ಜೈ ಜೈ ಜೈ ಹನುಮಾನ ಗೋಸಾಯೀ; ಕೃಪಾ ಕರಹು ಗುರುದೇವ ಕೀ ನಾಯೀ
ಜೋ ಶತ ವಾರ ಪಾಠ ಕರ ಕೋಯೀ; ಛೂಟಹಿ ಬಂದಿ ಮಹಾ ಸುಖ ಹೋಯೀ
ಜೋ ಯಹ ಪಡೈ ಹನುಮಾನ ಚಾಲೀಸಾ; ಹೋಯ ಸಿದ್ಧಿ ಸಾಖೀ ಗೌರೀಶಾ
ತುಲಸೀದಾಸ ಸದಾ ಹರಿ ಚೇರಾ; ಕೀಜೈ ನಾಥ ಹೃದಯ ಮಹ ಡೇರಾ
ಪವನ ತನಯ ಸಂಕಟ ಹರಣ – ಮಂಗಳ ಮೂರತಿ ರೂಪ್; ರಾಮ ಲಖನ ಸೀತಾ ಸಹಿತ – ಹೃದಯ ಬಸಹು ಸುರಭೂಪ್
Check Hanuman Chalisa in Other Indian Languages
- ☀ [ಹನುಮಾನ್ ಚಾಲಿಸಾ] Jai Hanuman Chalisa Lyrics in Kannada PDF
- ☀ [हनुमान चालीसा] Shri Hanuman Chalisa Lyrics in Hindi, English, and Tamil PDF
- ☀ [హనుమాన్ చాలీసా] Hanuman Chalisa Lyrics in Telugu PDF
- ☀[હનુમાન ચાલીસાના ગુજરાતી ગીતનો અર્થ] Hanuman Chalisa Lyrics in Gujarati PDF
- ☀[হনুমান চালিসা বাংলা গানের কথার অর্থ] Hanuman Chalisa Lyrics in Bengali PDF
- ☀[हनुमान चालिसाचे मराठीत फायदे] Hanuman Chalisa Lyrics in Marathi PDF